ನಿನ್ನ ಮಿಲನ ಅದೇ ಕವನ

ನಿನ್ನ ಮಿಲನ ಅದೇ ಕವನ
ಶಾಂತಿ ವನದ ಕೂಜನಂ
ನವಿಲು ನಾನೆ ಉಯಿಲು ನೀನೆ
ರಜತರಂಗ ದಿಂಚರಂ ||೧||

ದೂರ ದೂರ ದೂರ ದಾರಿ
ನೂರು ತೀರ ತೀರಿತು
ಮತ್ತೆ ಮತ್ತೆ ಹತ್ತು ನೂರು
ದಾರಿ ತೋರದಾಯಿತು ||೨||

ಕಾಡು ಕಂಟಿ ಕಡಲು ಇತ್ತ
ಹುತ್ತ ಕುತ್ತ ನಾಗರಂ
ಬೆಂಕಿ ಭುಗಿಲು ಹೊಗೆಯು ಅತ್ತ
ಕರುಣ ಮರಣ ತೋರಣಂ ||೩||

ತನನ ತನನ ಮನನ ಮನನ
ಜಲತರಂಗ ಎಲ್ಲಿದೆ
ಹನನ ಹನನ ಹೋಮ ಹವನ
ಧೂಮ ಧೂಳಿ ಇಲ್ಲಿದೆ ||೪||

ಇಗೋ ಶರಣು ಸಕಲ ಶರಣು
ಶಬ್ದ ಮುಗ್ಧ ಅರ್‍ಪಣಂ
ಆತ್ಮ ದೀಪ ದೇಹ ಧೂಪ
ಆಖಿಲ ನಿಖಿಲ ತರ್‍ಪಣಂ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿಯ ಕ್ಲೈಮ್ಯಾಕ್ಸ್
Next post ಹೋದೂರಿನಲ್ಲಿ ಮಾಡಿದ್ದು

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

cheap jordans|wholesale air max|wholesale jordans|wholesale jewelry|wholesale jerseys